ಬುದ್ಧಿವಾದ

ಕೇಳಲಾರೆ ಕಣೆ ದೀಪಿಕಾ ನಿಲ್ಲಿಸೆ ಈ ಬಡಾಯಿ, ಡೌಲು
ನಾ ಕಾಣದ್ದೇನೇ ನೀ ಕುಟ್ಬುವ ಈ ಜಂಬದ ಡೋಲು?
ಗಂಡಿನ ಹಂಗಿಲ್ಲದೆ ಬಾಳುತ್ತೀಯಾ? ಲೇ ಹುಡುಗಿ!
ತೇಲುವ ಬೆಂಡಾಗುತ್ತದೆಯೆ, ಬಾಗಿದ ಜೊಂಡಾಗುತ್ತದೆಯೆ
ನಿಂತ ನೆಲವನ್ನೆ ಕೊರೆದು
ಗರಗರ ಬುಗುರಿ ತಿರುಗಿ ಹೋಗುತ್ತದೆಯೆ ಬದುಕು!
ಕೀಲು ಹಾಕದ ಚಕ್ರ ಹೊರಳದೆ ಇರುತ್ತದ?
ಕೆರಳದೆ ಇರುತ್ತದೇನೇ
ಸರಳ ನಡುವೆ ಹಸಿದು ಸುತ್ತುವ ತೋಳದ ಹಿಂಡು?
ಅಲ್ಲವೆ, ಪಾಳೆಯದಲ್ಲೇ ದಂಗೆ ಎದ್ದು ಗುಲ್ಲಾಗಿದೆ
ದಡಗಳ ತಡೆಗಳ ದಾಟಿ ಹೊಲಕ್ಕೆ ಮದಜಲ ನುಗ್ಗಿದೆ
ಆದರು ಕೋಟೆಯ ಹೊರಗೆ
ಸಿಪಾಯಿ ಭಂಗಿಯ ಶಿಸ್ತಿನ ಅಂಗಿಯ ಸಂಗತಿಯೇನೇ?
ಹೇಳೇ ದೀಪಿಕಾ
ಎಣ್ಣೆ ಇರುವಾಗ ಉರಿಯದೆ ಕಣ್ಣು ಮುಚ್ಚುವುದೇನೇ?

ಈ ಶಿಸ್ತಿನ ನಾಟಕ ಹೀಗೇ ಸಾಗಿರುವಾಗಲೆ
ಭರತವಾಕ್ಯಕ್ಕೆ ಇನ್ನೂ ಹೊತ್ತಿರುವಾಗಲೆ
ಕಾಡು ಕರೆಯುತ್ತದೆ ಹಾಡು ಮುಗಿಯುತ್ತದೆ,
ಎಣ್ಣೆಯೆಲ್ಲ ಒಣಗಿ ಹಣತೆ
ಮಣ್ಣ ಹೊಳಕೆಯಾಗುತ್ತದೆ;
ನಿನ್ನೆ ಮೈಯಲ್ಲಿ ಚೈತ್ರ ಬಿಚ್ಚಿರುವ ಚಿಗುರನ್ನು ಹಚ್ಚಿರುವ ಅಗರನ್ನು
ಮಂಜುನಾಲಿಗೆಯೊಂದು ನೆಕ್ಕಿ ಚಪ್ಪರಿಸಿ ಬಿಡುತ್ತದೆ;
ನೀ ಮುಟ್ಟಿದ್ದನ್ನು ಮುತ್ತಿಡುತ್ತ
ಮೆಟ್ಟಿದಲ್ಲಿ ಮಣ್ಣು ಮುಕ್ಕುತ್ತ
ಬೆನ್ನುಬಿದ್ದು ಅಲೆದ ಊರು
ಗುಡ್‌ಬೈ ಕೂಗಿ ಓಡುತ್ತದೆ.

ಅಮೇಲೆ
ಅಜ್ಜಿಯರ ಬಳಗ ಕರೆಯುತ್ತದೆ ನಿನ್ನನ್ನ
ಪುಣ್ಯಕಥೆ ಕೇಳುವುದಕ್ಕೆ ಪುರಾಣದ ಕಟ್ಟೆಗೆ
ಹತ್ತಿ ಬಿಡಿಸುವುದಕ್ಕೆ ಬತ್ತಿ ಹೊಸೆಯುವುದಕ್ಕೆ;
ಕಣ್ವರು ಸಾಕಿದ ಕನ್ಯೆ
ಕಣ್ಣು ಹೊರಳಿದ್ದ ವೇಳೆ
ಭೂಪನೊಬ್ಬನ ಮೈ ಬೆಂಕಿಗೆ ಧೂಪಹಾಕಿದ್ದ ಕೇಳುವುದಕ್ಕೆ:
ಬೆಣ್ಣೆ ಹಾಲು ಹೊತ್ತು ನೆರೆದ ಕನ್ಯೆಗೋಪಿಯರ ನಡುವಿನಲ್ಲಿ
ಬೃಂದಾವನದ ಭಗವಂತ ಮೆರೆದ
ಶೃಂಗಾರದಲ್ಲಿ ಕಿವಿತೊಳೆಯುವುದಕ್ಕೆ!

ಕೇಳುತ್ತ ಕೇಳುತ್ತ ಕಣ್ಣೀರು ಕರೆಯುತ್ತೀಯ
ದೇವರೇ ಗೆಜ್ಜೆಕಟ್ಟಿ ಕುಣಿದರೂ
ನಾನು ಹೆಜ್ಜೆಹಾಕದೆ ಹೋದೆನೆ ಅಂತ;
ಅಟ್ಟಮೇಲೆ ವ್ಯರ್ಥವಾಗಿ ಉರಿಯುತ್ತೀಯ
ಮಡಿಲಲ್ಲೇ ಹಾಲು ಹಣ್ಣಿದ್ದೂ
ಬಡಿವಾರಕ್ಕೆ ಉಪವಾಸ ಬಿದ್ದೆನೆ ಅಂತ;
ಕಟ್ಟದ ಮಾಲೆ ಯಾರೂ ಮುಟ್ಟದೆ ಬಾಡಿತೆ ದೇವರೆ
ಪಲ್ಲವಿ ತಾನಗಳಿಲ್ಲದೆ ಪವಮಾನಕ್ಕೆ ಬಂದೆನೆ ಅಂತ;
ಅದರೆ ದೀಪಿಕಾ ಅಗ
ತಿದ್ದಲು ಏನಿರುತ್ತದೆ?
ಡೋಲು ಹರಿದಿರುತ್ತದೆ, ಕೋಲು ಮುರಿದಿರುತ್ತದೆ
ಉಪ್ಪು ಮುಕ್ಕಿದ ಸೊಕ್ಕು ನೀರು ಕುಡಿಯುತ್ತಿರುತ್ತದೆ.
*****
ದೀಪಿಕಾ ಕವನಗುಚ್ಛ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯತಿ (ಸನ್ಯಾಸಿ)
Next post ಸತ್ಯ ಸೀಮೆಗೆ ತಾಯೆ ನಡಿಸೆನ್ನ

ಸಣ್ಣ ಕತೆ

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

cheap jordans|wholesale air max|wholesale jordans|wholesale jewelry|wholesale jerseys